ಸೂರ್ಯ ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾಯಿದ್ದಾರೆ
ಹುಲ್ಲು ಹಾಡ್ಹಾಡ್ತ ಜೂಗಾಡ್ತ ನಗುತಾಯಿದ್ದಾರೆ ।। ಪ ।।
ಏನೋ ಜಪವನು ಮಾಡ್ಕೊಂಡು
ಮರಗಳು ಸುಮ್ಮನೆ ನಿಂತ್ಕೊಂಡು (*೨)
ನಂಗೆ ಏನಾಗ್ತಾಯ್ದೆ ಅಂತ ಗೊತ್ತೇ ಇಲ್ಲ
ಆದ್ರೆ ಮನೇಗ್ಹೊಗೋ ದಾರಿನ ಮರ್ತೆ ಇಲ್ಲ ।। ಅಪ
।।
ಹಸಿರೆಲೆಗಳಿಂದ
ಉಸಿರಾನುಬಂಧ
ಕಾಲ್ಜಾರಿ ಬಿದ್ದಾಗ
ಕೇಸರಿನಾನಂದ
ನನ್ನ ಸ್ಥಿತಿ ನೋಡಿ ಎರ್ಚಾಡಿ
ನಗ್ತಾಯಿತ್ತು ಕೊಚ್ಚೆ
ಈಗ ನನ್ನ್ ಅಂಡಮೇಲೆ
ಕಂದ್ಬಣ್ಣದ್ ಹಚ್ಚೆ!!
।। ೧ ।।
ಮುಸ್ಸಂಜೆಯಾಯ್ತು
ಭಯವು ಶುರುವಾಯ್ತು
ಇಲ್ಲೊಂದು ಕಾಡ್ಬೇಕು
ನಮ್ಮೆಡೆಗೆ ಬಂತು!!
ಓಡ್ಹೋಗಿ ಸೇರ್ಕೊಂಡ್ವಿ
ಮನೆಯನ್ನು ಸದ್ಯ ।।
ಹೇಗಿತ್ತು ನಾವಿಬ್ರು
ಬರೆದಂತ ಪದ್ಯ?
।। ೨ ।।
-- ಹೃದಯ್ & ವತ್ಸ
(೨೦೧೮-೧೨-೨೭
ರಂದು ಬೆಟ್ಟ-ಗುಡ್ಡಗಳನ್ನು
ಹತ್ತುವಾಗ ನಡೆದಂತ
ಘಟನೆಗಳನ್ನು ಆಧಾರಿಸಿದ ಕವನ)
No comments:
Post a Comment